ಸೋಮವಾರ, ಡಿಸೆಂಬರ್ 17, 2012

ಶಿಕಾರಿ - ಯಶವಂತ್ ಚಿತ್ತಾಲ



Ø ಬದುಕಿಗೆ ಅರ್ಥವೇನು? ಎಂದು ಕೇಳುತ್ತ ಕೂಡ್ರುವುದು ಏನು ಹುಡುಕಾಟದ ಲಕ್ಷಣವೋ, ಇಲ್ಲ ಬದುಕಿನಲ್ಲಿ ವಿಶ್ವಾಸ ಕಳಕೊಂಡದ್ದರ ಲಕ್ಷಣವೋ?

Ø ಎಂಥ ಕ್ಷುಲ್ಲಕ ಸಂಗತಿಗಳು ನನ್ನ ಜೀವನದ ಎಂತಹ ಮಹತ್ವದ ಘಟನೆಗಳಿಗೆ ಕಾರಣಗಳಾಗಿವೆ ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ.

Ø ಈ ಘಟನೆಗಳಿಂದಾಗಿ ಇಷ್ಟೊಂದು ಯಾತನೆಯನ್ನು ಯಾಕೆ ಅನುಭವಿಸಬೇಕು? ಅನುಭವಿಸುತ್ತೇನೆ. ಯಾತನೆಯ ಬೇರುಗಳವರೆಗೆ ಇಳಿದು ನೋಡಬೇಕು.

Ø ನನ್ನನ್ನು ದೂರಬೇಡ, ದೂರು ಈ ಸಮುದ್ರವನ್ನು ಎಲ್ಲ ನೋವನ್ನು ಕ್ಷುಲ್ಲಕಗೊಳಿಸುವ ಅದರ ಉಲ್ಲಾಸದ ಉದ್ಘೋಷವನ್ನು .

Ø ಇಂದಿನ ಯಾಂತ್ರಿಕ ಜೀವನದಿಂದಾಗಿ ದಡ್ಡು ಬಿದ್ದ ತಮ್ಮ ಸಂವೇದನೆಗಳನ್ನು ಚುರುಕುಗೊಳಿಸಲು ಇವರು ಇತರರ ದುಃಖವನ್ನು ಕೂಡ ಉಪಯೋಗಿಸಿಕೊಳ್ಳಬಲ್ಲರೇನೋ? ಉಳಿದವರ ಯಾತನೆ ಕೂಡ ಇವರಿಗೆ ಮನರಂಜನೆಯ ವಿಷಯವಾಗಬಲ್ಲುದೇನೋ?

Ø The logic of  all actions have their roots in selfish motives