chigurida kanasu ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
chigurida kanasu ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಅಕ್ಟೋಬರ್ 20, 2012

ಚಿಗುರಿದ ಕನಸು - ಶಿವರಾಮ ಕಾರಂತ




ಮನೋದೌರ್ಬಲ್ಯಕ್ಕೂ ಒಂದು ಮಿತಿ ಇರಬೇಕು.

ಒಂದು ಗಳಿಗೆಯ ಉನ್ಮತ್ತತೆಯಿಂದ ಯಾವಜ್ಜೀವನದ ಭವಿಷ್ಯ ನಿರ್ಧರಿಸುವುದು ತಪ್ಪು.

ಆದರ್ಶಕ್ಕಾಗಿ, ತನ್ನವರಿಗಾಗಿ, ಜನಕ್ಕಾಗಿ ವ್ಯಕ್ತಿ ಸುಖವನ್ನು ಮರೆಯಲಾರದೆ ಹೋದರೆ ಬಾಳ್ವೆಗೆ ಚೆಲುವು ಬರಲಾರದು.

ಮನುಷ್ಯನ ಉದ್ಯೋಗಕ್ಕೂ, ಆದರ್ಶಕ್ಕೂ ಪರಸ್ಪರ ಹೊಂದಾಣಿಕೆ ಬಾರದೆ ಹೋದಲ್ಲಿ ಜೀವನದಲ್ಲಿ ಸುಖ ಸಿಗಲಾರದು.

ಆರಿಸಿದ ಬಾಳ್ವೆಯನ್ನು ಚೆನ್ನಾಗಿ ಮಾಡಿಕೊ, ಬಾಳ್ವೆ ಇರುವುದು ಕಲಿಯುವುದಕ್ಕೆ, ಕಲಿತು ತಿದ್ದಿಕೊಳ್ಳುವುದಕ್ಕೆ, ತಿದ್ದಿ ತೃಪ್ತಿ ಪಡಿಯುವುದಕ್ಕೆ.

ಬಾಳು ಬೆದರುವುದಕ್ಕಾಗಿಯಲ್ಲ. ಬದುಕುವುದಕ್ಕಾಗಿ.