ಗುರುವಾರ, ಜನವರಿ 3, 2013

ದೇವರು ಬೇಕು , ಆದರೆ ಅವನಿಲ್ಲ



ಮೊನ್ನೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದೆಹುಬ್ಬಳ್ಳಿ ರೈಲ್ವೆ ಸ್ಟೇಷನ್ನಿನಲ್ಲಿ ಒಬ್ಬ ಮುದುಕಿ ಭಿಕ್ಷೆ ಬೇಡುತ್ತಿದ್ದಳುಸುಮ್ಮನೆ ಕಣ್ಣು ಹಾಯಿಸಿದೆಅವಳ ಮಗಳು ಆಗತಾನೆ ಮಗುವನ್ನು ಹೆತ್ತಿದ್ದಳುಒಂದೆರಡು ದಿನ ಆಗಿರಬಹುದು ಮಗುವಿಗೆಮಗುವಿನ ಕೆಂಪನೆ ಪಾದಗಳು ನನ್ನನ್ನು ಹಂಗಿಸಿದವುಇಬ್ಬರು ಸೇರಿ ಭಿಕ್ಷೆ ಬೇಡುತ್ತಿದ್ದರು ಅದೂ  ರಣ ಬಿಸಿಲಿನಲ್ಲಿಕರಳು ಚುರ್ರ್ ಎಂದಿತುನಾನು ಭಿಕ್ಷೆ ಬೇಡುವವರನ್ನು ತಾತ್ಸಾರದಿಂದಲೇ ನೋಡಿದವನುಹಾಗೆ ಮುಂದೆ ನಡೆದುಕೊಂಡು ಬಂದೆಅವ್ವ ನೆನಪಾದಳುಮನೆಗೆ ಯಾರಾದರು ಬಡವರು ಬಂದು ಮಗಳು ಮೈ ನೆರೆತಿದ್ದಾಳೆಹಡೆದಿದ್ದಾಳೆ  ಅಂತ ಅಂದಾಗ ಅವ್ವ ಅವರನ್ನು ಹಾಗೆ ಬರೀಗೈಲಿ ಕಳುಹಿಸಿದ್ದು ಇಲ್ಲವೇ ಇಲ್ಲದುಡ್ದಾದರೆ  ದುಡ್ಡು ಇಲ್ಲವೇ ದಿನಸಿ ಕೊಟ್ಟು ಕಳುಹಿಸುತ್ತಾಳೆ . ಹಾಗೆ ಇವರಿಗೆ ಕೊಡಲು ನನ್ನಲ್ಲಿ ಏನಿದೆ ಎಂದು ವಿಚಾರ ಮಾಡುತ್ತ ಮುಂದೆ ನಡೆಯುತ್ತಾ ಬಂದೆಅವ್ವ ಅಕ್ಕ ಸೇರಿ ಕಟ್ಟಿದ ಬುತ್ತಿಯ ಗಂಟಿತ್ತು . ಎಷ್ಟೋ ಮುಂದೆ ಹೋದವನು ಮರಳಿ ಬಂದು  ಬುತ್ತಿಯನ್ನು ಅವರಿಗೆ ಕೊಟ್ಟು  ನನ್ನ ಪಯಣ ಮುಂದುವರೆಸಿದೆಪಯಣದ ತುಂಬಾ ಇದೇ  ಯೋಚನೆ.

ನನ್ನ ಕಟ್ಟಾ ಆಸ್ತಿಕ  ಗೆಳೆಯನಿಗೆ ಇದನೆಲ್ಲ  ಹೇಳಿದೆ.  ತುಂಬಾ ಒಳ್ಳೆಯ ಕೆಲಸ ಮಾಡಿದೆ ಎಂದ. ನಾನವನಿಗೆ ನಿಮ್ಮ ದೇವರು ಈಗ ಎಲ್ಲಿದ್ದ ಎಂದು ಕೇಳಿದೆ. ನಿನ್ನ ಮನಸ್ಸಿನಲ್ಲಿ ಎಂದ. ಎದೆ ಅಗಲವಾಗಲಿಲ್ಲ, ನಾಚಿಕೆಯಾಯಿತು.  ದೇವರಿದ್ದಾನೆ ಎಂದ ಮೇಲೆ ಎಲ್ಲರಿಗೂ ಇರಬೇಕಲ್ಲವೇ ಎಂದೇ. ನಿನ್ನ ಜೊತೆ ವಾದ ಮಾಡಿ ಗೆಲ್ಲುವ ಶಕ್ತಿ ನನ್ನಲ್ಲಿಲ್ಲ ಎಂದ

ದೇವರನ್ನು ನಾನು ನಂಬುವುದಿಲ್ಲ ಎಂದು ಇದೇ  ಗೆಳೆಯನಿಗೆ ಹೇಳಿದ್ದಾಗ ನೀನು ಅವನ್ನನ್ನು ನಂಬಬಾರದೆಂದರೆ ಅವನ ಮಟ್ಟವನ್ನು ನೀನು  ಏರಬೇಕು ಇಲ್ಲವೇ ಅವನನ್ನೇ ನಿನ್ನ ಮಟ್ಟಕ್ಕೆ ಇಳಿಸಬೇಕು ಎಂದಿದ್ದ
ನಾವು ಅವನ ಮಟ್ಟಕ್ಕೇರಿದರೆ ಅವನ ಸಹಾಯವೇ ಅನಾವಶ್ಯಕ : ಅಲ್ಲದೆ ಆಗ ನಮ್ಮ ಇಷ್ಟಾರ್ಥಗಳು ನಮಗೇ  ಬೇಡವೆನ್ನಿಸಬಹುದು
ಇನ್ನು ದೇವರನ್ನೇ ನಮ್ಮ ಮಟ್ಟಕ್ಕೆ ಇಳಿಸಿಕೊಂಡು ಅವನೂ ನಮ್ಮಂತೆ ಸ್ತೋತ್ರ ಪ್ರಿಯ ನೆಂದು ಭಾವಿಸಿ ದೇವರನ್ನು ನಮ್ಮ ಪ್ರತಿಬಿಂಬವಾಗಿ  ಸೃಷ್ಟಿಸುತ್ತೇವೆ ಎಂದಿದ್ದೆ. ಮತ್ತೆ ಅದೇ ಮಾತನ್ನು ಹೇಳಿದ್ದ.  ನಿನ್ನ ಜೊತೆ ವಾದ ಮಾಡಿ ಗೆಲ್ಲುವ ಶಕ್ತಿ ನನ್ನಲ್ಲಿಲ್ಲ.

ಇದೆ ಎಂಬ ವಸ್ತುವಿನ ಯಾವ ಪರಿಚಯವೂ ಇಲ್ಲದ ನಂಬಿಕೆ ಏನು ಮಾಡಿತು...? 
ದೇವರಿದ್ದರೆ ಲೋಕಹಿತಕ್ಕಾಗಿ ಇರಬೇಕು. ಅದರಲ್ಲಿ ಆಸಕ್ತಿಯಿಲ್ಲದ ದೇವರನ್ನು ಕಟ್ಟಿಕೊಂಡು ನಮಗೆ ಆಗಬೇಕಾದದ್ದೇನು. ಹಿತದ ಸಾಧನೆ ಲಕ್ಷಾಂತರ ವರ್ಷ ಕಳೆದ ಮೇಲೂ ' ಆಗಬೇಕು' ಎನ್ನುವ ಸ್ಥಿತಿಯಲ್ಲೇ ಇದೆ

ಮನುಕುಲಕ್ಕೆ ನನ್ನಂಥ ನಿರೀಶ್ವರವಾದಿಗಳೂ  ಸೇರಿದಂತೆ ಮನುಕುಲಕ್ಕೆ ಕರುಣಾದ್ರ ಹೃದಯನೂ , ಪ್ರೇಮಸ್ವರೂಪಿಯೂ  ಆದ ದೇವರು ಬೇಕು.ನಾನು ದೇವರಿಲ್ಲ ಎಂದುಕೊಳ್ಳುವಾಗ ನನ್ನ ಮನಸ್ಸಿನಲ್ಲಿರುವುದು ಸಂತೋಷವಲ್ಲ  ನಾನು ಸಂಪ್ರದಾಯದ ಗುಲಾಮನಲ್ಲ , ವಿಚಾರವಾದಿ ' ಎಂಬ ಹೆಮ್ಮೆಯಲ್ಲ ನಂಬುವವರನ್ನು ಹೀಯಾಳಿಸಬೇಕೆಂಬ ಅಪೇಕ್ಷೆಯಂತೂ  ಖಂಡಿತ ಅಲ್ಲ'ದೇವರು ಇಲ್ಲವಲ್ಲ ' ಎಂಬ ವಿಷಾದ.. 

ದೇವರು ಬೇಕು , ಆದರೆ  ಅವನಿಲ್ಲ ಇದು ನಮ್ಮ ಕರುಣಾಜನಕ ಐರನಿ .

ಒಟ್ಟಿನಲ್ಲಿ ಜೀವಕೋಟಿಯ ಸಂಕಟವನ್ನು ಪರಿಹರಿಸಬಲ್ಲ ದೇವರು - ಅಂತ ದೇವರು ಇದ್ದರೆ  ಯಾರು ಬೇಡ ಎನ್ನುತ್ತಾರೆ.

     ಗ್ರಂಥ ಋಣ:ದೇವರು (ಎ ಎನ್ ಮೂರ್ತಿರಾವ್)

ಸೋಮವಾರ, ಡಿಸೆಂಬರ್ 17, 2012

ಶಿಕಾರಿ - ಯಶವಂತ್ ಚಿತ್ತಾಲ



Ø ಬದುಕಿಗೆ ಅರ್ಥವೇನು? ಎಂದು ಕೇಳುತ್ತ ಕೂಡ್ರುವುದು ಏನು ಹುಡುಕಾಟದ ಲಕ್ಷಣವೋ, ಇಲ್ಲ ಬದುಕಿನಲ್ಲಿ ವಿಶ್ವಾಸ ಕಳಕೊಂಡದ್ದರ ಲಕ್ಷಣವೋ?

Ø ಎಂಥ ಕ್ಷುಲ್ಲಕ ಸಂಗತಿಗಳು ನನ್ನ ಜೀವನದ ಎಂತಹ ಮಹತ್ವದ ಘಟನೆಗಳಿಗೆ ಕಾರಣಗಳಾಗಿವೆ ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ.

Ø ಈ ಘಟನೆಗಳಿಂದಾಗಿ ಇಷ್ಟೊಂದು ಯಾತನೆಯನ್ನು ಯಾಕೆ ಅನುಭವಿಸಬೇಕು? ಅನುಭವಿಸುತ್ತೇನೆ. ಯಾತನೆಯ ಬೇರುಗಳವರೆಗೆ ಇಳಿದು ನೋಡಬೇಕು.

Ø ನನ್ನನ್ನು ದೂರಬೇಡ, ದೂರು ಈ ಸಮುದ್ರವನ್ನು ಎಲ್ಲ ನೋವನ್ನು ಕ್ಷುಲ್ಲಕಗೊಳಿಸುವ ಅದರ ಉಲ್ಲಾಸದ ಉದ್ಘೋಷವನ್ನು .

Ø ಇಂದಿನ ಯಾಂತ್ರಿಕ ಜೀವನದಿಂದಾಗಿ ದಡ್ಡು ಬಿದ್ದ ತಮ್ಮ ಸಂವೇದನೆಗಳನ್ನು ಚುರುಕುಗೊಳಿಸಲು ಇವರು ಇತರರ ದುಃಖವನ್ನು ಕೂಡ ಉಪಯೋಗಿಸಿಕೊಳ್ಳಬಲ್ಲರೇನೋ? ಉಳಿದವರ ಯಾತನೆ ಕೂಡ ಇವರಿಗೆ ಮನರಂಜನೆಯ ವಿಷಯವಾಗಬಲ್ಲುದೇನೋ?

Ø The logic of  all actions have their roots in selfish motives    

ಬುಧವಾರ, ನವೆಂಬರ್ 14, 2012

ಹಣತೆ - ಜಿ.ಎಸ್ . ಶಿವರುದ್ರಪ್ಪ







ಹಣತೆ ಹಚ್ಚುತ್ತೇನೆ ನಾನೂ 
ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ  ಜಿದ್ದಿನಿಂದಲ್ಲ 
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ 
ಇದರಲ್ಲಿ ಮುಳುಗಿ ಕರಗಿರುವಾಗ 
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ 

ಹಣತೆ ಹಚ್ಚುತ್ತೇನೆ ನಾನೂ 
ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ ಆಸೆಯಿಂದಲ್ಲ 
ಕತ್ತಲಿನಿಂದ ಕತ್ತಲಿಗೆ ತಡಕಾಡಿಕೊಂಡು ಬಂದಿವೆ  
ಹೆಜ್ಜೆ ಶತಮಾನದಿಂದಲೂ 

ನಡು ನಡುವೆ ಒಂದಷ್ಟು ಬೆಳಕು ಬೇಕೆಂದು 
ಆಗಾಗ ಕಡ್ಡಿ ಗೀಚಿದ್ದೇವೆ, ದೀಪ ಮುಡಿಸಿದ್ದೇವೆ.
ವೇದ, ಶಾಸ್ತ್ರ , ಪುರಾಣ, ಇತಿಹಾಸ, ಕಾವ್ಯ , ವಿಜ್ಞಾನಗಳ 
ಮತಾಪು, ಪಟಾಕಿ, ಸುರುಸುರು ಬತ್ತಿ , ಹೂ ಬಾಣ ಸುಟ್ಟಿದ್ದೇವೆ
ತಮಸೋಮ ಜ್ಯೋತಿರ್ಗಮಯ  
ಎನ್ನುತ್ತಾ ಬರೀ ಬೂದಿಯನ್ನೇ ಕೊನೆಗೆ ಕಂಡಿದ್ದೇವೆ

ನನಗೂ ಗೊತ್ತು, ಕತ್ತಲೆಗೆ
ಕೊನೆಯಿರದ ಬಾಯಾರಿಕೆ.
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತಿಂದರೂ
ಕುಡಿದರೂ ಇದಕ್ಕೆ ಇನ್ನೂ ಬೇಕು 
ಇನ್ನೂ ಬೇಕು ಎನ್ನುವ ಬಯಕೆ 

ಆದರೆ ಹಣತೆ ಹಚ್ಚುತ್ತೇನೆ ನಾನೂ 
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ 
ಇರುವಷ್ಟು ಹೊತ್ತು ನಿನ್ನ ಮುಖ ನಾನು ನಿನ್ನ  ಮುಖ ನೀನು  
ನೋಡಬಹುದೆಂಬ ಒಂದೇ ಒಂದು ಆಸೆಯಿಂದ 
ಹಣತೆ ಆರಿದ ಮೇಲೆ,  ನೀನು ಯಾರೋಮತ್ತೆ
ನಾನು ಯಾರೋ





ಗುರುವಾರ, ನವೆಂಬರ್ 1, 2012

ಕನ್ನಡ ತಾಯಿಯ ಸುಪ್ರಭಾತ - ಚಂದ್ರಶೇಖರ ಕಂಬಾರ




ಮುಂಗೋಳಿ ಕುಗ್ಯಾವು ಮೂಡಣ ಬೆಳಗಿ
ತಂಗಾಳಿ ಬೀಸ್ಯಾವು ತವರೀ ಹೂವರಳಿ
ಹೂ ಹೂವಿನೊಳಗೊಂದು ಕೈಲಾಸವರಳ್ಯಾವು
ಕೈಲಾಸ ಕೈ ಮುಗಿದು ಭೂ ಲೋಕಕಿಳಿದಾವು
ಸಾವಿರದ ಶರಣವ್ವ ಕನ್ನಡದ ತಾಯೇ

ಸೂಸು ನಗೆಯಲಿ ಜಗದ ಲೇಸ ತುಳುಕಿಸುವವಳೆ
ಕಲ್ಲಿನ ಎದೆಯೊಳಗೆ ಹುಲ್ಲು ಚಿಗುರಿಸುವವಳೆ
ಹಕ್ಕಿ ಹಾರ್ಯಾಡ್ಯಾವು ಹಾಡೂತ, ಏನಂತ?
ಉಧೊ ನಿನ್ನ ಪಾದಕ್ಕೆ ಆದಿ ಮೂರುತಿಯೇ
ಸಾವಿರದ ಶರಣವ್ವ ಕನ್ನಡದ ತಾಯೇ

ಪಡುಗಡಲ ತೆರೆಗಳಲಿ ಪಾದ ತೊಳೆವವಳೆ
ಬೆಟ್ಟ ಬಯಲಿನ ಹಸಿರ ತೊಟ್ಟು ನಿಂತವಳೆ
ಮಲೆನಾಡ ಶಿಖರದಲಿ ಮಳೆಬಿಲ್ಲ ಮುಡಿದವಳೆ
ಅವ್ವಾ ಅಂದಾಗೊಮ್ಮೆ ಸಾಕಾರಗೊಂಬವಳೆ
ನಗುಮೊಗದ ಜಗದಂಬೆ ಬೆಳಕಿನ ತಾಯೇ

ಕುರಿತು ಓದದ ಕಾವ್ಯ ಪರಿಣತರ ಮಾತೆ
ಸಂತರ ಶರಣರ ಮಂತ್ರದ ಮಾತೆ
ಶಬ್ದಕ್ಕ ಬೆಳಕನ್ನ ಮುಡಿಸುವ ಕವಿಗಣ
ದಿನಬೆಳಗು ಹೊಗಳುವರು ನಿನ್ನ ಕೀರ್ತಿಯನೆ
ಸಾವಿರದ ಶರಣವ್ವ ಕನ್ನಡದ ತಾಯೇ

ಜಾಣ ಜಾಣೆಯರೆದೆಗೆ ಕನಸು ಕೊಡುವವಳೆ
ಬಾಗಿದವರಿಗೆ ಭಾಗ ಹೃದಯ ಕೊಡುವವಳೆ
ನಿನ್ಹಾಂಗ ಧರ್ಮದಲಿ ಧಾರಾಳತನದಲ್ಲಿ
ಇನ್ನೊಬ್ಬರನು ಕಾಣೆ ಧರೆಗೆ ದೊಡ್ಡವಳೆ
ಸಾವಿರದ ಶರಣವ್ವ ಕನ್ನಡದ ತಾಯೇ

 ಮ್ಯಾಲೇಳು ಲೋಕಕ್ಕ ಕೀಳೇಲು ಲೋಕಕ್ಕ
ಅಧಿಕವಾಗಲಿ ಹಬ್ಬಿ ನಿನ್ನ ಕಾರಣಿಕ
ಹಾಲೊಕ್ಕಲಾಗಲಿ ಹೊನ್ನೊಕ್ಕಲಾಗಲಿ
ತೂಗು ತೊಟ್ಟಿಲ ಬೆಳ್ಳಿ ಬಟ್ಟಲದ ತಾಯೇ
ಸಾವಿರದ ಶರಣವ್ವ ಕನ್ನಡದ ತಾಯೇ